ದುಬೈ ಕರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ – ಇಬ್ಬರು ಭಾರತೀಯರು ಮೃತ್ಯು

ದುಬೈ : ಕೊಲ್ಲಿ ರಾಷ್ಟ್ರ ದುಬೈ ಅಲ್ ಕರಾಮದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಭಾರತೀಯರು ಸಾವನ್ನಪ್ಪಿದ್ದರೆ , ಇತರ 8 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಕರಾಮ ‘ಡೇ ಟು ಡೇ’ ಶಾಪಿಂಗ್ ಸೆಂಟರ್ ಬಳಿಯ ಬಿನ್ಹೈದರ್ ಬಿಲ್ಡಿಂಗ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೇರಳ ಮಲಪ್ಪುರಂ ಮೂಲದ ಯಾಕೂಬ್ ಅಬ್ದುಲ್ಲಾ ಮತ್ತು ತಲಶ್ಶೇರಿ ಟೆಂಪಲ್ ಗೇಟ್‌ನಲ್ಲಿರುವ ನಿಟ್ಟೂರು ಮನೆಯ ನಿದಿನ್ ದಾಸ್ ಅವರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ 8 ಜನರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗುರುವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ನಿವಾಸದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ. ಕಣ್ಣೂರು ತಲಶ್ಶೇರಿ ಪುನ್ನೋಲ್‌ನ 2 ಜನರ ಸ್ಥಿತಿ ಚಿಂತಾಜನಕವಾಗಿದೆ. ಮೂರು ಕೊಠಡಿಯ ಫ್ಲಾಟ್‌ನಲ್ಲಿ 17 ಜನರು ವಾಸಿಸುತ್ತಿದ್ದರು. ರಾತ್ರಿ, ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡಿದೆ. ಘಟನೆಯ ಕುರಿತು ಪೊಲೀಸ್ ತನಿಖೆ ಪ್ರಗತಿಯಲ್ಲಿದೆ. ಮೃತ ದೇಹಗಳನ್ನು ರಶೀದ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ

Comments (0)
Add Comment