ನಕಲಿ ಪಾಸ್‌ ಪಡೆದು ಒಳಗೆ ನುಗ್ಗಿದ್ದ ವ್ಯಕ್ತಿಗಳಿಬ್ಬರು ಮೈಸೂರಿನವರು.!

ನವದೆಹಲಿ: ಲೋಕಸಭೆ ಕಲಾಪಕ್ಕೆ ನುಗ್ಗಿ ಇಬ್ಬರು ಯುವಕರು ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು ಸಂಸದರ ಪೀಠ ತಲುಪಿ ಅಶ್ರವಾಯು ಎರಚಿದ ಇಬ್ಬರು ದುಷ್ಕರ್ಮಿಗಳ ಗುರುತು ಪತ್ತೆಯಾಗಿದೆ.

ಇವರನ್ನು ಮೈಸೂರು ಮೂಲದ ಮನೋರಂಜನ್‌, ಮತ್ತೊಬ್ಬನನ್ನು ಸಾಗರ್ ಶರ್ಮಾ ಎಂದು ಗುರುತಿಸಲಾಗಿದೆ. ಇಬ್ಬರು ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್‌ ಪಡೆದಿದ್ದರು ಎಂದು ತಿಳಿದುಬಂದಿದೆ.

ರೈತನ ಮಗನಾಗಿರುವ ಮನೋರಂಜನ್ ಇಂಜಿನಿಯರ್ ಓದಿದ್ದ ಎಂದು ತಿಳಿದುಬಂದಿದೆ. ಈ ಕುರಿತು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್‌ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ.

Comments (0)
Add Comment