ನನ್ನನ್ನು ಜೈಲಿಗೆ ತಳ್ಳಿದ ಬಳಿಕ ಕಾಂಗ್ರೆಸ್ ವಕೀಲರು ನನ್ನ ವಿರುದ್ಧ ಹೋರಾಡಿದರು – ಕೇಂದ್ರ ಗೃಹ ಸಚಿವ ಅಮಿತ್ ಶಾ

ಅಹ್ಮದಾಬಾದ್ : ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ನನ್ನನ್ನು ಜೈಲಿಗೆ ತಳ್ಳಿದ ನಂತರ ಕಾಂಗ್ರೆಸ್ ವಕೀಲರು ನನ್ನ ವಿರುದ್ಧ ಹೋರಾಡಿದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸೊಹ್ರಾಬುದ್ದೀನ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ತನಿಖಾ ಸಂಸ್ಥೆಯು ತನ್ನನ್ನು ಬಂಧಿಸಿದ್ದ 2010 ಘಟನೆಯನ್ನು ನೆನಪಿಸಿಕೊಂಡ ಕೇಂದ್ರ ಗೃಹಸಚಿವ ಅಮಿತ್ ಶಾ, ಸಿಬಿಐ ಪ್ರಕರಣದಲ್ಲಿ ಕಾಂಗ್ರೆಸ್ ನನ್ನನ್ನು ಜೈಲಿಗೆ ಕಳುಹಿಸಿತ್ತು. ನನ್ನ ಪಾಲಿಗೆ ಅದು ಸಹಜವಾಗಿಯೇ ಕಷ್ಟದ ಅವಧಿಯಾಗಿತ್ತು ಎಂದು ಹೇಳಿದ್ದಾರೆ. ಗುಜರಾತಿನ ಜುನಾಗಡದಲ್ಲಿ ರಾಜ್ಯದ ಮಾಜಿ ಸಚಿವ ದಿ.ದಿವ್ಯಕಾಂತ ನಾನಾವತಿಯವರ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಡನಾಡಿದ ಶಾ, ನನ್ನನ್ನು ಜೈಲಿಗೆ ತಳ್ಳುವ ಕೇವಲ ಐದು ನಿಮಿಷಗಳ ಮುನ್ನ ನಾನು ಜೈಲು ಸಚಿವನಾಗಿದ್ದೆ, ದೇವರು ಯಾವುದೇ ವ್ಯಕ್ತಿಯನ್ನು ಅಧೋಗತಿಗಿಳಿಸಲು ಇದಕ್ಕಿಂತ ಒಳ್ಳೆಯ ಅವಕಾಶವನ್ನು ನೀಡಲು ಸಾಧ್ಯವಿರಲಿಲ್ಲ ಎಂದು ಹೇಳಿದ್ದಾರೆ.

Comments (0)
Add Comment