ನಿರ್ಮಲಾ ಸೀತಾರಾಮನ್​​ರನ್ನು ವಜಾಗೊಳಿಸಿ – ರಾಷ್ಟ್ರಪತಿಗೆ ತಮಿಳುನಾಡು IRS ಅಧಿಕಾರಿ ಪತ್ರ

ಚೆನ್ನೈ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ವಜಾಗೊಳಿಸಿ ಎಂದು ತಮಿಳುನಾಡು ಐಆರ್‌ಎಸ್ (ಭಾರತೀಯ ಕಂದಾಯ ಸೇವೆ) ಅಧಿಕಾರಿ ಬಿ ಬಾಲಮುರುಗನ್ ಎಂಬವರು ರಾಷ್ಟ್ರಪತಿ ಅವರಿಗೆ ಪತ್ರ ಬರೆದಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರು ಜಾರಿ ನಿರ್ದೇಶನಾಲಯವನ್ನು ಬಿಜೆಪಿಯ ವಿಸ್ತೃತ ಅಂಗವಾಗಿ ಪರಿವರ್ತಿಸಿದ್ದಾರೆ. ತಮಿಳುನಾಡಿನ ಸೇಲಂನಲ್ಲಿನ ರೈತರಿಗೆ PMLA ಕಾಯಿದೆಯಡಿ (ಹಣ ಲಾಂಡರಿಂಗ್ ತಡೆ ಕಾಯಿದೆ, 2002) ಇಡಿ ಸಮನ್ಸ್ ಕಳುಹಿಸಿದ್ದರಿಂದ ಹಣಕಾಸು ಸಚಿವರನ್ನು ವಜಾ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಜಮೀನು ಸಮಸ್ಯೆಗಳಿಂದಾಗಿ ರೈತರು ಕಳೆದ ನಾಲ್ಕು ವರ್ಷಗಳಿಂದ ಕೃಷಿ ಚಟುವಟಿಕೆಗಳನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಅವರ ಬ್ಯಾಂಕ್ ಖಾತೆಯಲ್ಲಿ ಕೇವಲ 450 ರೂ ಇತ್ತು, ಅವರು ವೃದ್ಧಾಪ್ಯ ಪಿಂಚಣಿ ರೂ. 1000 ಪಡೆಯುತ್ತಿದ್ದಾರೆ. ಅವರ ಜೀವನೋಪಾಯಕ್ಕಾಗಿ ಸರ್ಕಾರ ಒದಗಿಸಿದ ಉಚಿತ ಪಡಿತರವನ್ನು ಆಶ್ರಯಿಸಿದ್ದಾರೆ ಎಂದು ಪತ್ರದಲ್ಲಿ ಹೇಳಿದ್ದಾರೆ.

Comments (0)
Add Comment