ನೀಡಲಾಗದಿದ್ದರೆ ಕುರ್ಚಿ ಬಿಡಿ: ಮಮತಾ ಬ್ಯಾನರ್ಜಿ

 

ಪಶ್ಚಿಮ ಬಂಗಳ: ನಮ್ಮ ಪಾಲಿನ ಹಣ ನೀಡಲಾಗದಿದ್ದರೆ ಸ್ಥಾನದಿಂದ ಕೆಳಗಿಳಿಯಿರಿ ಎಂದು ಪ್ರಧಾನಿ ಮೋದಿ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರವು ನರೇಗಾ ಪಾಲು ನೀಡುತ್ತಿಲ್ಲ. ಇಂದು ಇಡೀ ದೇಶದಲ್ಲಿ ಜಿಎಸ್ಟಿ ಎಂಬ ಒಂದೇ ತೆರಿಗೆ ಪದ್ಧತಿ ಜಾರಿಯಲ್ಲಿದೆ. ಎಲ್ಲಾ ತೆರಿಗೆಯನ್ನೂ ಕೇಂದ್ರವೇ ಸಂಗ್ರಹಿಸುತ್ತಿದೆ. ಆದರೆ ರಾಜ್ಯಗಳಿಂದಲೇ ತೆರಿಗೆ ಸಂಗ್ರಹಿಸುತ್ತಿದ್ದರೂ ಪಾಲನ್ನು ನೀಡುತ್ತಿಲ್ಲ. ದೆಹಲಿಗೆ ತೆರಳಿ ಪ್ರಧಾನಿಯವರನ್ನೇ ಕೇಳುತ್ತೇನೆ ಎಂದಿದ್ದಾರೆ.

 

 

ನೀಡಲಾಗದಿದ್ದರೆ ಕುರ್ಚಿ ಬಿಡಿ: ಮಮತಾ ಬ್ಯಾನರ್ಜಿ
Comments (0)
Add Comment