ಪೇಜಾವರ ಶ್ರೀ ನೇತೃತ್ವದ ಅಯೋಧ್ಯೆ ಶ್ರೀರಾಮನ ಮಂಡಲೋತ್ಸವದಲ್ಲಿ ಸಿಎಂ ಯೋಗಿ ಭಾಗಿ

ಅಯೋಧ್ಯೆ: ಅಯೋಧ್ಯೆ ರಾಮಮಂದಿರದಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮಂಡಲೋತ್ಸವದಲ್ಲಿಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದಾರೆ.

ಪೇಜಾವರ ಶ್ರೀಗಳು ಮಂಡಲೋತ್ಸವದ ಪ್ರಯುಕ್ತ ನಿತ್ಯ ನಡೆಯುತ್ತಿರುವ ಧಾರ್ಮಿಕ ವಿಧಿವಿಧಾನಗಳನ್ನು ವಿವರಿಸಿ ವಿಶೇಷ ಹೋಮ, ಹವನ ಕಲಶಾರಾಧನೆ ಕಲಶಾಭಿಷೇಕದ ರಜತ ಕುಂಭ ಪ್ರಸಾದ ನೀಡಿ ಶುಭ ಹಾರೈಸಿದರು.

ಇನ್ನು ಈ ವೇಳೆ ಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ , ವಿಹಿಂಪ ಮುಖಂಡ ಗೋಪಾಲ್ ಜಿ , ಅರ್ಚಕರು ಉಪಸ್ಥಿತರಿದ್ದರು.

Comments (0)
Add Comment