ಪೊಲೀಸರಿಗೆ ಮಚ್ಚು ಬೀಸಿದ ರೌಡಿಶೀಟರ್‌ ಕಾಲಿಗೆ ಗುಂಡೇಟು

ತುಮಕೂರು: ತುಮಕೂರು ತಾಲೂಕಿನ ಒಕ್ಕೋಡಿ ಬಳಿ ಗ್ರಾಮಾಂತರ ಠಾಣೆ ಹೆಡ್‌ಕಾನ್ಸ್‌ ಟೇಬಲ್‌ ಮೇಲೆ ಮಚ್ಚು ಬೀಸಿರುವ ರೌಡಿಶೀಟರ್‌ ವಿರುದ್ಧ ಪೊಲೀಸರು ಫೈರಿಂಗ್‌ ಮಾಡಿರುವ ಘಟನೆ ನಡೆದಿದೆ.

ಮನೋಜ್‌ ಅಲಿಯಾಸ್‌ ಮಂಡೇಲಾನ ಎಂಬಾತ ಬಂಧನಕ್ಕೆ ತೆರಳಿದ ವೇಳೆ ಹೆಡ್‌ ಕಾನ್‌ ಸ್ಟೇಬಲ್‌ ಮೇಲೆ ರೌಡಿಶೀಟರ್‌ ಮಚ್ಚು ಬೀಸಿದ್ದು, ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

ಇನ್ನು ಶನಿವಾರ ಬೆಳಗ್ಗೆ ಬಂಡೆ ನಾಗನ ಮೇಲೆ ರೌಡಿಶೀಟರ್‌ ಮನೋಜಾ ಮಚ್ಚು ಬೀಸಿ ಕೊಲೆಗೆ ಯತ್ನಿಸಿದ್ದು, ಬಂಡೆನಾಗ ತಪ್ಪಸಿಕೊಂಡು ಜೀವ ಉಳಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಕುರಿತು ಪೊಲೀಸರು ಮನೋಜ್‌ಗಾಗಿ ಹುಡುಕಾಟ ನಡೆಸಿದ್ದರು.

ರೌಡಿಶೀಟರ್‌ ಮನೋಜ್‌ ಫೋನ್‌ಕಾಲ್‌ ನೆಟ್‌ವರ್ಕ್‌ ಆಧಾರದ ಮೇಲೆ ಹೆಗ್ಗರೆ ಬಳಿಯ ಒಕ್ಕೋಡಿಯಲ್ಲಿ ತಲೆ ಮರೆಸಿಕೊಂಡಿರುವುದು ಗೊತ್ತಾಗಿದ್ದು, ತಕ್ಷಣವೇ ಮನೋಜ್‌ ಬಂಧನಕ್ಕೆ ತೆರಳಿದ್ದ ವೇಳೆ ಹೆಡ್‌ ಕಾನ್‌ ಸ್ಟೇಬಲ್‌ ಮೇಲೆ ಮನೋಜ್‌ ಮಚ್ಚು ಬೀಸಿದ್ದು, ಹೆಡ್‌ ಕಾನ್‌ ಸ್ಟೇಬಲ್‌ ಗೆ ಕೈಗೆ ಗಾಯಗಳಾಗಿವೆ.

Comments (0)
Add Comment