ಬಂಧನ ಭಯದಲ್ಲೆ ನೀರಿಕ್ಷಣ ಜಾಮೀನಿಗೆ ಕೋರ್ಟ್ ಮೊರೆಹೋದ ಹಾಲಶ್ರೀ ಸ್ವಾಮಿ

ಬೆಂಗಳೂರು : ಚೈತ್ರಾ ಕುಂದಾಪುರ ಹಾಗೂ ಟೀಮ್ ಬಂಧನ ಪ್ರಕರಣದಲ್ಲಿ ಹಾಲಶ್ರೀ ಸ್ವಾಮಿ ಬಂಧನಕ್ಕೆ ಸಿಸಿಬಿ ಬಲೆ ಬೀಸಿದೆ. ಈ ಮಧ್ಯೆ ಹಾಲಶ್ರೀ ಸ್ವಾಮಿಜಿ ನೀರಿಕ್ಷಣಾ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಪ್ರಕರಣದ ಎ3 ಆರೋಪಿಯಾಗಿರುವ ಅಭಿನವ ಹಾಲಶ್ರೀ ಪರ ವಕೀಲರು CCH-57 ನೇ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು‌ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ನಿನ್ನೆ ಸಂಜೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದು ನಾಳೆ ಅರ್ಜಿ ವಿಚಾರಣೆಗೆ ಬರಲಿದೆ. ಸದ್ಯ ಅಜ್ಞಾತ ಸ್ಥಳದಲ್ಲೆ ಅಡಗಿ ಕುಳಿತಿದಿದ್ದು ಯಾವ ಕ್ಷಣದಲ್ಲಿ ಬೇಕಾದ್ರು ಸಿಸಿಬಿ ಬಲೆಗೆ ಬೀಳಬಹುದು.

Comments (0)
Add Comment