ಬಜೆಟ್‌‌ನಲ್ಲಿ ಲಕ್ಷದೀಪ ಅಭಿವೃದ್ದಿ ಬಗ್ಗೆ ಘೋಷಣೆ ಮಾಡಿ ಮಾಲ್ಡೀವ್ಸ್‌‌ಗೆ ಬಿಸಿಮುಟ್ಟಿಸಿದ ಭಾರತ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಧ್ಯಂತರ ಬಜೆಟ್ ಮಂಡನೆ ಮಾಡುತ್ತಿದ್ದು, ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯಕ್ಕೆ ಸರ್ಕಾರ ಹಣ ವ್ಯವಸ್ಥೆ ಮಾಡಲಿದೆ ಎಂದು ತಿಳಿಸಿದ್ದಾರೆ.ಹೊಸ ವರ್ಷಾರಂಭದಲ್ಲಿ ಪ್ರಧಾನಿ ಮೋದಿ ಎರಡು ದಿನಗಳ ಲಕ್ಷದ್ವೀಪ ಪ್ರವಾಸಕ್ಕೆ ತೆರಳಿದ್ದು ಸಿಕ್ಕಾಪಟ್ಟೆ ಸುದ್ದಿಯಾಗಿದ್ದು, ಬಳಿಕ ಮಾಲ್ಡೀವ್ಸ್‌‌ ಮೋದಿ ವಿರುದ್ದ ಟ್ವೀಟ್ ಮಾಡಿತ್ತು. ಇದೀಗ ಬಜೆಟ್‌‌ನಲ್ಲಿ ಲಕ್ಷದೀಪ ಅಭಿವೃದ್ದಿ ಬಗ್ಗೆ ಘೋಷಣೆ ಮಾಡಿ ಮಾಲ್ಡೀವ್ಸ್‌‌ಗೆ ಭಾರತ ಬಿಸಿಮುಟ್ಟಿಸಿದೆ.

Comments (0)
Add Comment