ಮಂಗಳೂರು: ಮೋದಿ ಪರಿವಾರದ ಮೇಲೆ ಬಹುಭಾಷಾ ನಟ ಪ್ರಕಾಶ್ ರೈ ತೀವ್ರ ವಾಗ್ದಾಳಿ

ಮಂಗಳೂರು: “ಶ್ರೀ ಶ್ರೀ ಶ್ರೀ ವಿಶ್ವಗುರು ವಸೂಲಿಗುರು ಮಹಾಪ್ರಭುಗಳೇ ಮನ್ ಕೀ ಬಾತ್ ನಲ್ಲಿ ಯಾರಿಂದ ಎಷ್ಟು ಕಿತ್ಕೊಂಡ್ರಿ” ಎಂದು ನಿನ್ನೆ ಟ್ವೀಟ್ ಮಾಡಿದ್ದ ಬಹುಭಾಷಾ ನಟ ಪ್ರಕಾಶ್ ರೈಯವರು ಇಂದು ಮೋದಿ ಪರಿವಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೋದಿಯವರ ಹೆಸರೆತ್ತದೇ ಮಹಾನುಭಾವ ಎನ್ನುತ್ತಲೇ, ಬ್ರಿಜ್ ಭೂಷಣ್ ಲೈಂಗಿಕ ಕಿರುಕುಳ, ಇಲೆಕ್ಟ್ರಾಲ್ ಬಾಂಡ್ ಹಗರಣ, ಅದಾನಿ, ಅಂಬಾನಿ, ಲಾಟರಿ ಮಾರುವ ಮಾರ್ಟಿನ್ ಮೋದಿ ಪರಿವಾರ ಎಂದು ಹೇಳಿದ್ದಾರೆ. ಮನ್ ಕೀ ಬಾತ್ ನಲ್ಲಿ ಮಣಿಪುರದ ಹೆಣ್ಣುಮಕ್ಕಳ ಬಗ್ಗೆ ಯಾಕೆ ಧ್ವನಿ ಎತ್ತಲ್ಲ ಎಂದು ಮೋದಿಗೆ ಪ್ರಶ್ನಿಸಿದ್ದಾರೆ. ತಾನು ಈ ಬಾರಿ ಚುನಾವಣೆ ಎದುರಿಸೋಲ್ಲ. ಯಾರೇ ಕರೆದರೂ ಪ್ರಚಾರಕ್ಕೆ ಹೋಗೋಲ್ಲ. ಪ್ರತಿಪಕ್ಷದ ಸ್ಥಾನದಲ್ಲಿ ನಿಂತು ಕಾರ್ಯ ನಿರ್ವಹಿಸುತ್ತೇನೆ ಎಂದಿರುವ ಪ್ರಕಾಶ್ ರೈಯ ಸಂಪೂರ್ಣ ಮಾತು ಈ ವೀಡಿಯೋದಲ್ಲಿದೆ.

Comments (0)
Add Comment