ಮಾಲ್ಡೀವ್ಸ್‌ಗೆ ಮತ್ತೊಂದು ಶಾಕ್ – ದ್ವೀಪರಾಷ್ಟ್ರದಲ್ಲಿ ಚಿತ್ರೀಕರಣ ನಡೆಸದಿರಲು ಭಾರತೀಯ ಚಿತ್ರರಂಗ ನಿರ್ಧಾರ

ಮುಂಬೈ : ಮಾಲ್ಡೀವ್ಸ್‌ ಹಾಗೂ ಭಾರತದ ಬಿಕ್ಕಟ್ಟು ಮುಂದುವರೆದಿದೆ. ಭಾರತೀಯರ ಮಾಲ್ಡೀವ್ಸ್‌ ದ್ವೇಷ ಈಗ ಇನ್ನೊಂದು ಹಂತ ತಲುಪಿದೆ. ಸಿನಿಮಾ ಚಿತ್ರೀಕರಣಕ್ಕೆ ಪ್ರಸಿದ್ದವಾಗಿರುವ ಮಾಲ್ಡಿವ್ಸ್‌ನಲ್ಲಿ ಚಿತ್ರೀಕರಣ ನಡೆಸದಿರಲು ಭಾರತೀಯ ಸಿನಿಮಾರಂಗ ನಿರ್ಧರಿಸಿದೆ. ಆಲ್‌ ಇಂಡಿಯಾ ಸಿನಿ ವರ್ಕರ್ ಅಸೋಸಿಯೇಷನ್‌ ಈ ಕುರಿತು ಅಧಿಕೃತ ಹೇಳಿಕೆ ಹೊರಬಿಟ್ಟಿದೆ. ಎಐಸಿಡಬ್ಲ್ಯುಎ ಅಧ್ಯಕ್ಷ ಸುರೇಶ್‌ ಶ್ಯಾಮಲಾಲ್‌ ಮಾಲ್ಡೀವ್ಸ್‌ ಬದಲಾಗಿ ಭಾರತದ ದ್ವೀಪಗಳನ್ನು ಪ್ರಸಿದ್ದಗೊಳಿಸುವಂತೆ ಹೇಳಿದ್ದಾರೆ. ಭಾರತದ ವೈಮನಸ್ಯದ ನಡುವೆಯೂ ತನ್ನ ಉದ್ದಟತನವನ್ನು ಮುಂದುವರೆಸಿರುವ ಮಾಲ್ಡಿವ್ಸ್‌ ಮಾರ್ಚ್ 15 ಕ್ಕೂ ಮುನ್ನ ಭಾರತದ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ತಾಕೀತು ಮಾಡಿದೆ.

Comments (0)
Add Comment