ಮುರುಘಾ ಶರಣರಿಗೆ ಜಾಮೀನು: ಷರತ್ತುಗಳು ಇವು.!

ಬೆಂಗಳೂರು : ಪೋಕ್ಸೋ ಕಾಯ್ದೆಯಡಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಜಾಮೀನು ನೀಡಿ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ.

ಹೈಕೋರ್ಟ್ 7 ಷರತ್ತುಗಳನ್ನು ವಿಧಿಸಿ, ಜಾಮೀನು ನೀಡಿದೆ. ಆ 7 ಷರತ್ತುಗಳೆಂದರೆ..

1. 12 ಲಕ್ಷ ಬಾಂಡ್ ಮ್ಯೂರಿಟಿ ಕೊಡಬೇಕು.

2. ಪಾಸ್‌ಪೋರ್ಟ್ ಕೋರ್ಟ್‌ ವಶಕ್ಕೆ ನೀಡಬೇಕು.

3. ವಿಚಾರಣೆ ಮುಗಿಯುವವರೆಗೂ ಚಿತ್ರದುರ್ಗಕ್ಕೆ ಹೋಗುವಂತಿಲ್ಲ.

4. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು.

5. ಇಬ್ಬರ ಶೂರಿಟಿಯನ್ನು ನೀಡಬೇಕು.

6. ಇಂತಹ ಕೃತ್ಯ ಪುನರಾವರ್ತನೆಯಾಗಬಾರದು. 7. ವೀಡಿಯೊ ಕಾನ್ಸರೆನ್ಸ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಾಗಬೇಕು.

Comments (0)
Add Comment