ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರೈತರ ವಿಶ್ವಾಸ ಕಳೆದುಕೊಂಡಿದೆ – ರಾಹುಲ್ ಗಾಂಧಿ

ಬಿಹಾರ:ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ರೈತರ ವಿಶ್ವಾಸ ಕಳೆದುಕೊಂಡಿದೆ. ಕಾಂಗ್ರೆಸ್ ಗೆ ಮತಚಲಾಯಿಸಿ ಅಧಿಕಾರ ನೀಡಿದರೆ ಮತ್ತೆ ನಂಬಿಕೆ, ವಿಶ್ವಾಸ ಗಳಿಸಲು ಪ್ರಯತ್ನಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಬಿಹಾರದ ಪೂರ್ಣಿಯಾದಲ್ಲಿ ಭಾರತ್ ಜೋಡೊ ನ್ಯಾಯ ಯಾತ್ರೆಯ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮೋದಿ ಸರ್ಕಾರ ರೈತರ ಭಯವನ್ನು ಹೋಗಲಾಡಿಸಲು ಸೋತಿದೆ. ನಿಜ ಹೇಳಬೇಕೆಂದರೆ ರೈತರ ವಿಶ್ವಾಸವನ್ನೇ ಕಳೆದುಕೊಂಡಿದೆ.ಇದನ್ನು ಕೇಳಿ ಜನ ಚಪ್ಪಾಳೆ ತಟ್ಟುತ್ತಿದ್ದಂತೆ, ‘ಇದು ಕೇವಲ ಪೊಳ್ಳು ಭರವಸೆಯಲ್ಲ, ಈ ಹಿಂದಿನ ನಮ್ಮ ಕೆಲಸಗಳೇ ಇದಕ್ಕೆ ಸಾಕ್ಷಿ. ನಾವು ರೈತ ಸ್ನೇಹಿ ಭೂಸ್ವಾಧೀನ ಮಸೂದೆಯನ್ನು ತಂದಿದ್ದೇವೆ, 72,000 ಕೋಟಿ ಸಾಲಮನ್ನಾ ಮಾಡಿದ್ದೇವೆ ಎಂದರು.

ಇನ್ನು ಛತ್ತೀಸ್ಗಢ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಉತ್ತಮ ಬೆಲೆಯಲ್ಲಿ ಮಾರಾಟ ಮಾಡಿ ಆದಾಯ ಗಳಿಸಿದ್ದಾರೆ’ ಹೀಗಾಗಿ ನಿಮ್ಮಲ್ಲಿ ನಾನು ಮನವಿ ಮಾಡುತ್ತೇನೆ, ನಮಗೆ ಒಂದು ಅವಕಾಶ ಕೊಡಿ, ಆ ವಿಶ್ವಾಸವನ್ನು ಗಳಿಸಲು ಪ್ರಯತ್ನಿಸುತ್ತೇವೆ’ಎಂದು ಹೇಳಿದ್ದಾರೆ.

Comments (0)
Add Comment