‘ಯುವರಾಜನ ಕೈ ಹಿಡಿದು ಓಡಿದ ಕಾಂಗ್ರೆಸ್ಸಿಗರು ಸುಸ್ತಾದರು’: ಬಿಜೆಪಿ ವ್ಯಂಗ್ಯ

ಬೆಂಗಳೂರು: ತುಕ್ಡೇ ತುಕ್ಡೇ ಗ್ಯಾಂಗ್‌ ಒಟ್ಟುಗೂಡಿಸಲು ಮಾಡಿದ ಭಾರತ್‌ ತೋಡೋ ಯಾತ್ರೆ ವಿಫಲವಾಯಿತು. ಪ್ರಧಾನಿ ಮೋದಿಯವರನ್ನು ಎದುರಿಸಲು ಮಾಡಿಕೊಂಡ INDI ಮೈತ್ರಿಕೂಟ ಒಡೆದು ಹೋಯಿತು ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟದ ಬಗ್ಗೆ ವ್ಯಂಗ್ಯವಾಡಿ ಬಿಜೆಪಿ ಟ್ವೀಟ್ ಮಾಡಿದ್ದು, ಮಮತಾ ಬ್ಯಾನರ್ಜಿ ಓಡಿ ಹೋದರು, ಅರವಿಂದ ಕೇಜ್ರಿವಾಲಾ ಓಡಿ ಹೋದರು
ನಿತೀಶ್‌ ಕುಮಾರ್‌ ಹೊರ ಹೋದರು, ಸ್ಟಾಲಿನ್‌ ಓಡಲು ಸನ್ನದ್ಧರಾಗಿರುವರು ರಾಹುಲ್‌ ಗಾಂಧಿ ಓಡುತ್ತಲೇ ಇರುವರು ಎಂದು ಲೇವಡಿ ಮಾಡಿದೆ.

ಭಾರತವನ್ನು ಒಡೆಯಲು ಕಾಂಗ್ರೆಸ ಕೈಯಲ್ಲಿ ಸಾಧ್ಯವಾಗಲಿಲ್ಲ. ಹೀಗಾಗಿ INDI ಮೈತ್ರಿ ಎಂದು ಹೆಸರಿಟ್ಟುಕೊಂಡು ಆ ಹೆಸರನ್ನಾದರೂ ಛಿದ್ರಗೊಳಿಸಿ ತೃಪ್ತರಾದರು! ಯುವರಾಜನ ಕೈ ಹಿಡಿದು ಓಡಿದ ಕಾಂಗ್ರೆಸ್ಸಿಗರು ಸುಸ್ತಾದರು ಎಂದು ಬಿಜೆಪಿ ಹೇಳಿದೆ.

Comments (0)
Add Comment