ರಾಮಲಲ್ಲಾ ಮೂರ್ತಿ ನಾನು ಅಂದುಕೊಂಡಂತೆಯೇ ಇದೆ : ನಟಿ ಕಂಗನಾ ರಣಾವತ್

ಅಯೋಧ್ಯೆ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಇದ್ದು ಈ ಮೊದಲೇ ಪ್ರಾಣ ಪ್ರಾಣಪ್ರತಿಷ್ಠೆಯ ಬಾಲರಾಮನ ಮೂರ್ತಿಯ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಂಡಿದ್ದು ಖ್ಯಾತ ನಟಿಯಾದ ಕಂಗನಾ ರಣಾವತ್ ಅಯೋಧ್ಯೆ ರಾಮ್ ಲಲ್ಲಾ ವಿಗ್ರಹದ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಾಮಲಲ್ಲಾ ಮೂರ್ತಿಯನ್ನು ಕೆತ್ತಿರುವ ಮೈಸೂರು ಮೂಲದ ಕಲಾವಿದರಾದ ಅರುಣ್ ಯೋಗಿರಾಜ್ ಅವರನ್ನು ಕಂಗನಾ ರಣಾವತ್ ಶ್ಲಾಘಿಸಿದ್ದಾರೆ.

ಈ ಬಾಲರಾಮನ ಮೂರ್ತಿಯ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಅವರು “ರಾಮನು ಚಿಕ್ಕ ಹುಡುಗನಾಗಿದ್ದಾಗ ಈ ರೀತಿ ಕಾಣುತ್ತಾನೆ ಎಂದು ನಾನು ಯಾವರೀತಿ ಭಾವಿಸಿದ್ದೆ ಅದೇ ರೀತಿ ಈ ಮೂರ್ತಿಯು ಮೂಡಿಬಂದಿದೆ ಎಂದು ಅವರು ಬರೆದುಕೊಂಡಿದ್ದಾರೆ.

Comments (0)
Add Comment