ರಾಮಲಲ್ಲಾ ವಿಗ್ರಹದ ಫೋಟೋ ವೈರಲ್‌ – ಪ್ರಧಾನ ಅರ್ಚಕ ಅಸಮಾಧಾನ

ಅಯೋಧ್ಯೆ: ಅಯೋಧ್ಯೆಯ ಬಾಲರಾಮನ ವಿಗ್ರಹವನ್ನು ಸೇರಿಸುವ ಮೊದಲೇ ಕಣ್ಣಿಗೆ ಯಾವುದೇ ಪಟ್ಟಿ ಕಟ್ಟಿಲ್ಲದ ರಾಮನ ವಿಗ್ರಹದ ಫೋಟೋಗಳು ಸಾಕಷ್ಟು ವೈರಲ್ ಆಗಿದ್ದು, ಈ ಬಗ್ಗೆ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಗ್ರಹದ ಫೋಟೋಗಳನ್ನು ವೈರಲ್ ಮಾಡಿದವರ ಬಗ್ಗೆ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸತ್ಯೇಂದ್ರ ದಾಸ್ ಒತ್ತಾಯಿಸಿದ್ದಾರೆ.

ಇನ್ನು ಈ ಬಗ್ಗೆ ಟ್ರಸ್ಟ್ ಆಂತರಿಕ ವಿಚಾರಣೆ ನಡೆಸಿದ್ದು, ದೇಗುಲದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಉತ್ತರಾಧಿಕಾರಿಯಾಗಿ 23 ವರ್ಷದ ಮೋಹಿತ್ ಪಾಂಡೆ ಆಯ್ಕೆಯಾಗಿದ್ದಾರೆ.

Comments (0)
Add Comment