ರೈತರಿಗೆ ಸಂತಸದ ಸುದ್ದಿ: ರಸಗೊಬ್ಬರ ಮೇಲಿನ ಸಬ್ಸಿಡಿ ಮುಂದುವರಿಕೆ

ಕೇಂದ್ರ ಸರ್ಕಾರ ರೈತರಿಗೆ ಸಿಹಿಸುದ್ದಿ ನೀಡಿದೆ. ಈ ವರ್ಷ ರಸಗೊಬ್ಬರಗಳ ಸಬ್ಸಿಡಿಯಲ್ಲಿ ಯಾವುದೇ ಕಡಿತವಿಲ್ಲ ಮತ್ತು ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಮುಂದುವರಿಸಲು ನಿರ್ಧರಿಸಿದೆ.

ಮೊದಲಿನಂತೆ ಡಿಎಪಿ 50 ಕೆಜಿ ಚೀಲಕ್ಕೆ ₹ 1,350, ಎಂಒಪಿ ಚೀಲ ₹1,670 ಹಾಗೂ ಎನ್‌ ಪಿಕೆ ಚೀಲ ₹1,470ಕ್ಕೆ ಲಭ್ಯವಾಗಲಿದೆ.

ಪ್ರತಿ ಕೆ.ಜಿ.ಗೆ ಸಾರಜನಕಕ್ಕೆ ₹47.02, ಫಾಸ್ಫೇಟ್‌ ಮೇಲೆ ₹28.72, ಪೊಟಾಶಿಯಂ ಮೇಲೆ ₹2.38 ಮತ್ತು ಸಲ್ಬರ್‌  ಮೇಲೆ ₹1.89 ಸಬ್ಸಿಡಿ ಇರುತ್ತದೆ. ಇದು ಏಪ್ರಿಲ್‌ 1 ರಿಂದ ಸೆಪ್ಟೆಂಬರ್‌ 30 ರವರೆಗೆ ಮುಂದುವರಿಯುತ್ತದೆ.

Comments (0)
Add Comment