ಲೋಕಸಭಾ ಚುನಾವಣೆ; ಹಿರಿಯೂರು ಬಳಿ 1.44 ಕೋಟಿ ಹಣ ಸೀಜ್.!

 

ಚಿತ್ರದುರ್ಗ; ಹಿರಿಯೂರಿನ ಜವನಗೊಂಡನಹಳ್ಳಿ ಚೆಕ್ ಪೋಸ್ಟ್ ನಲ್ಲಿ ಎಟಿಎಂಗಳಿಗೆ ಹಣ ತುಂಬಲು ತೆಗೆದುಕೊಂಡು ಹೋಗುವ ವಾಹನದಲ್ಲಿದ್ದ ಅನಧಿಕೃತ 1.44 ಕೋಟಿ ಹಣವನ್ನು ಹಿರಿಯೂರು ತಹಶೀಲ್ದಾ‌ರ್
ಹಾಗೂ ಸರ್ಕಲ್ ಇನ್ಸೆಕ್ಟರ್ ಮತ್ತು ಎಸ್ ಎಸ್ ಟಿ ತಂಡದವರು ಸೀಜ್ ಮಾಡಿದ್ದಾರೆ.

ತುಮಕೂರು ಜಿಲ್ಲೆಯ ತುಮಕೂರು ಮತ್ತು ಶಿರಾ ಕಡೆಯ ವಾಹನವಾಗಿದ್ದು, ಇದರಲ್ಲಿ 1.44 ಲಕ್ಷ ಹೇಗೆ ಬಂತು ಹಾಗೂ ಈ ವಾಹನ ಚಿತ್ರದುರ್ಗದ ಕಡೆಗೆ ಏಕೆ ಬಂತು ಎನ್ನುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದ್ದು, ಹಣವನ್ನು ವಶಕ್ಕೆ ಪಡೆದುಕೊಂಡಿರುವ ಸ್ಥಳಕ್ಕೆ ಅಧಾಯ ತೆರಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

Comments (0)
Add Comment