ಲೋಕಸಭೆ ಚುನಾವಣೆ: ಮತ್ತೆ 5 ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌ ಜೊತೆಗೆ ಜಂಟಿಯಾಗಿ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ವಿಶೇಷವಾದ ಘೋಷಣೆಯೊಂದನ್ನು ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಶಾನ್‌ ನ್ಯಾಯ್‌, ಯುವ ನ್ಯಾಯ್‌ ಸೇರಿ ಸುಮಾರು 5 ಗ್ಯಾರಂಟಿ ಘೋಷಣೆ ಮಾಡಲಿದ್ದೇವೆ. ಶ್ರಮಿಕ್‌ ನ್ಯಾಯ್‌ ಹಾಗೂ ಹಿಸ್ಸೇದಾರ್‌ ನ್ಯಾಯ್‌ ಗ್ಯಾರಂಟಿ ಘೋಷಣೆ ಕೂಡ ಮಾಡುತ್ತಿದ್ದೇವೆ ಎಂದರು.

Comments (0)
Add Comment