ವಂದೇ ಭಾರತ್ ಎಕ್ಸ್​​ಪ್ರೆಸ್​ ರೈಲು ಬರುವ ವೇಳೆ ಹಳಿ ದಾಟಿದ ವ್ಯಕ್ತಿ – ಪ್ರಾಣಾಪಾಯದಿಂದ ಪಾರು

ಕೇರಳ: ವಂದೇ ಭಾರತ್ ರೈಲು ಬರುತ್ತಿರುವ ವೇಳೆಯಲ್ಲಿ ವ್ಯಯೊಬ್ಬರು ಹಳಿ ದಾಟಲು ಹೋಗಿ, ಕೂದಲೆಳೆಯುವ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆಕೇರಳದ ತಿರೂರ್‌‌ನಲ್ಲಿ ನಡೆದಿದೆ.

ತಿರೂರು ರೈಲ್ವೆ ಸ್ಟೇಷನ್​​ನಲ್ಲಿ ವ್ಯಕ್ತಿಯೊಬ್ಬರು ರೈಲು ಬರುವಂತಹ ಸಂದರ್ಭದಲ್ಲಿ ರೈಲ್ವೆ ಹಳಿ ದಾಟಿದ್ದು, ಘಟನೆಯ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಇನ್ನು ಪ್ರವೀಶ್ ಶೊರನೂರ್ ಎಂಬವರು ಈ ವಿಡಿಯೋನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Comments (0)
Add Comment