ವಿಶ್ವಕಪ್ ಟೂರ್ನಿ ಬಿಟ್ಟು ಪೂರ್ವಜರ ಗ್ರಾಮಕ್ಕೆ ಭೇಟಿ, ತಂಡದ ಸಹ ಆಟಗಾರರ ಜೊತೆ ಭೋಜನ – ಅರ್ಥವಾಗದ ಧೋನಿ ನಡೆ

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಕ್ರಿಕೆಟ್ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಅಭಿಮಾನಿಗಳು ನೋಡಲು ಸಾಧ್ಯವಾಗಲಿಲ್ಲ. ಭಾರತ-ಆಸ್ಟ್ರೇಲಿಯಾ ನಡುವಿನ ಫೈನಲ್‌ ಪಂದ್ಯದ ಸಮಯದಲ್ಲಿ ಐಸಿಸಿ ಮತ್ತು ಬಿಸಿಸಿಐ ಹಿಂದಿನ ಎಲ್ಲಾ ವಿಶ್ವಕಪ್ ವಿಜೇತ ನಾಯಕರನ್ನು ಆಹ್ವಾನಿಸಿದೆ ಎಂಬ ವರದಿಯಾಗಿತ್ತು.

ಹೀಗಾಗಿ ಎರಡು ಬಾರಿ ವಿಶ್ವಕಪ್ (ಏಕದಿನ, ಟಿ20) ವಿಜೇತ ತಂಡದ ನಾಯಕ ಧೋನಿ, ಕಾಣಿಸಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ, ಧೋನಿ ಎಲ್ಲಿಯೂ ಕಾಣಿಸಲಿಲ್ಲ. ಬದಲಾಗಿ, ಅವರು ಮತ್ತು ಅವರ ಪತ್ನಿ ಸಾಕ್ಷಿ ಸಿಂಗ್ ಧೋನಿ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ತಮ್ಮ ಪೂರ್ವಜರ ಗ್ರಾಮಕ್ಕೆ ಭೇಟಿ ನೀಡಿದರು. ಅಷ್ಟೇ ಅಲ್ಲದೆ ವಿಶ್ವಕಪ್ ನಂತರ ಧೋನಿ ಮತ್ತು ಸಾಕ್ಷಿ ದಂಪತಿ ಮಾಜಿ ಸಹ ಆಟಗಾರರಾದ ಸುರೇಶ್ ರೈನಾ ಮತ್ತು ಪ್ರಗ್ಯಾನ್ ಓಜಾ ಅವರಿಗೆ ಭೋಜನಕ್ಕೆ ಆತಿಥ್ಯ ನೀಡಿದರು. ಏತನ್ಮಧ್ಯೆ, ವಿಶ್ವಕಪ್ ಫೈನಲ್‌ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಸೋತಿತು.

Comments (0)
Add Comment