ಶಿಬಿರದಲ್ಲಿ ಆನೆ ತುಳಿತ – ಮಾವುತ ಮೃತ್ಯು

ತಿರುವನಂತಪುರಂ: ಆನೆ ಶಿಬಿರದಲ್ಲಿ ಆನೆಯೊಂದು ತನ್ನ ಸಹಾಯಕ ಮಾವುತನನ್ನೇ ತುಳಿದು ಕೊಂದಿರುವ ಘಟನೆಯು ಕೇರಳದ ಪುನ್ನತ್ತೂರು ಕೊಟ್ಟಾದಲ್ಲಿರುವ ಗುರುವಾಯೂರು ದೇವಸ್ವಂನಲ್ಲಿ ನಡೆದಿದೆ.

ರತೀಶ್‌ ಮೃತಪಟ್ಟ ಮಾವುತನಾಗಿದ್ದು, ಈತ ಬುಧವಾರ ಮಧ್ಯಾಹ್ನ ಶಿಬಿರದಲ್ಲಿರುವ ಚಂದ್ರಶೇಖರನ್‌ ಎಂಬ ಹೆಸರಿನ ಒಂಟಿ ದಂತದ ಆನೆಗೆ ನೀರು ಕುಡಿಸಲು ಹೋಗಿದ್ದಾರೆ. ಈ ವೇಳೆ ಮಾವುತ ತನಗೆ ತೊಂದರೆ ನೀಡಲು ಬಂದಿದ್ದಾನೆಂದು ಭಾವಿಸಿದ ಆನೆ ಆತನನ್ನು ತುಳಿದುಬಿಟ್ಟಿದೆ. ಬಳಿಕ ರತೀಶ್‌ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫ‌ಲಕಾರಿಯಾಗದೇ ಮೃತಪಟ್ಟದ್ದಾರೆ.

ಶಿಬಿರದಲ್ಲಿರುವ ಚಂದ್ರಶೇಖರನ್‌ ಎಂಬ ಹೆಸರಿನ ಒಂಟಿ ದಂತದ ಆನೆಯು ಅಶಿಸ್ತಿನಿಂದ ಹಾಗೂ ಅಪಾಯಕಾರಿಯಾಗಿಯೂ ವರ್ತಿಸುತ್ತಿದ್ದ ಕಾರಣ ಈ ಆನೆಯನ್ನು ಎಂದೂ ಶಿಬಿರದಿಂದ ಹೊರಗೆ ಕರೆತರುತ್ತಿರಲಿಲ್ಲ. ಈ ಹಿಂದೆ ಆನೆ ಮತ್ತೇರಿದಂತೆ ವರ್ತಿಸುದ್ದಾಗ ಅರಿವಳಿಕೆ ನೀಡಿ ಸಮಾಧಾನ ಪಡಿಸಲಾಗುತ್ತಿತ್ತು.

Comments (0)
Add Comment