‘ಸಂವಿಧಾನ ನನ್ನ ಧರ್ಮ ಎಂದಿದ್ದಕ್ಕೆ ಎಫ್‍ಐಆರ್ ಮಾಡೋದಾದರೆ ಮಾಡಲಿ ಬಿಡಿ’-ಪ್ರಿಯಾಂಕ್‌ ಖರ್ಗೆ

ಸಂವಿಧಾನ ನನ್ನ ಧರ್ಮ ಅದನ್ನು ಪ್ರಶ್ನೆ ಮಾಡೋದಕ್ಕೆ ನೀವ್ಯಾರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಏನು ಬೇಕಾದರೂ ಮಾಡಿಕೊಳ್ಳಲಿ. ನನ್ನ ಹೇಳಿಕೆ ಅತ್ಯಂತ ಸ್ಪಷ್ಟವಾಗಿದೆ. ನಾನು ಯಾವುದೇ ಒಂದು ಧರ್ಮದ ವಿರುದ್ಧ ಹೇಳಿಕೆ ನೀಡಿಲ್ಲ.ನಾನು ಅಂದು ಹೇಳಿದ್ದಕ್ಕೆ ಈಗಲೂ ಬದ್ಧವಾಗಿದ್ದೇನೆ. ಉದಯ ನಿಧಿ ಸ್ಟಾಲಿನ್‌ ಅವರ ಹೇಳಿಕೆಯನ್ನು ನಾನೇಕೆ ಸಮರ್ಥನೆ ಮಾಡಿಕೊಳ್ಳಬೇಕು. ನನಗೆ ಸಮಾನತೆ ಮೇಲೆ ನಂಬಿಕೆ ಇದೆ. ನನ್ನಸಂವಿಧಾನ ನನ್ನ ಧರ್ಮ ಎಂದು ಹೇಳಿಕೆ ನೀಡಿದ್ದೇನೆ ಅಷ್ಟೇʼʼ ಎಂದು ಸ್ಷಪ್ಟಪಡಿಸಿದರು.

ಉತ್ತರ ಪ್ರದೇಶದಲ್ಲಿ ಎಫ್‍ಐಆರ್ ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಯಾರು ಏನೇ ಮಾಡಿದರೂ ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್‌ ನಲ್ಲಾಗಲಿ ಅದಕ್ಕೆ ನಾನೇನು ಮಾಡಬೇಕು? ಸಂವಿಧಾನ ನನ್ನ ಧರ್ಮ ಎಂದಿದ್ದಕ್ಕೆ ಎಫ್‍ಐಆರ್ ಮಾಡೋದಾದರೆ ಮಾಡಲಿ ಬಿಡಿʼʼ ಎಂದು ಹೇಳಿದರು.

Comments (0)
Add Comment