ಸಿಇಓ ಸುಚನಾ ಸೇಠ್ ಕೇಸ್: ಮಗು ಚಿನ್ಮಯ್ ಅಂತ್ಯಕ್ರಿಯೆ ನೆರವೇರಿಸಿದ ತಂದೆ

ಬೆಂಗಳೂರು: ಸ್ವಂತ ಮಗುವನ್ನು ಕೊಂದ ಸ್ಟಾರ್ಟ್ಅಪ್ ಕಂಪನಿಯೊಂದರ ಸಿಇಓ ಸುಚನಾ ಸೇಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತ ಮಗು ಚಿನ್ಮಯ್ ಅಂತ್ಯಕ್ರಿಯೆಯನ್ನು ತಂದೆ ವೆಂಕಟರಮಣ ಸಕಲ ವಿಧಿ ವಿಧಾನಗಳಿಂದ ನೆರವೇರಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಆಸ್ಪತ್ರೆಯಲ್ಲಿ ನಿನ್ನೆ ಸಾಯಂಕಾಲ ಮಗುವಿನ ದೇಹದ ಮರಣೋತ್ತರ ಪರೀಕ್ಷೆ ನಡೆದ ಬಳಿಕ ತಡರಾತ್ರಿ ಸುಮಾರು 1.30 ಕ್ಕೆ ರಾಜಾಜಿನಗರದಲ್ಲಿರುವ ಸುಚನಾರ ಅಪಾರ್ಟ್ ಮೆಂಟ್ ಗೆ ಕಳೆಬರವನ್ನು ತರಲಾಗಿತ್ತು.

ಇದೀಗ ಹರೀಶ್ಚಂದ್ರಘಾಟ್ ನಲ್ಲಿ ಮಗು ಚಿನ್ಮಯ್ ನ ತಂದೆ ವೆಂಕಟರಮಣ ಅವರು ಸಕಲ ವಿಧಿ ವಿಧಾನಗಳಿಂದ  ್ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ.

ಈಗಾಗಲೇ ಆರು ದಿನಗಳವರೆಗೆ ಕೊಲೆ ಪಾತಕಿ ತಾಯಿ ಸುಚನಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಾಯಿಯನ್ನು ಗೋವಾಗೆ ಕರೆದುಕೊಂಡು ಹೋಗಿ ಅಲ್ಲಿನ ಪೊಲೀಸ್ ಅಧಿಕಾರಿಗಳು ಘಟನೆ ನಡೆದಿರುವಂತಹ ಅಪಾರ್ಟ್ಮೆಂಟ್ ನಲ್ಲಿ ಸ್ಥಳ ಮಹಜರು ನಡೆಸಲಿದ್ದಾರೆ.

ಮಗುವಿನ ತಂದೆ ವೆಂಕಟ ರಾಮನ್ ಸುಚನಾರಿಂದ ವಿಚ್ಚೇದನ ಪಡೆಯದಿದ್ದು ಕೇರಳ ಮೂಲದವರಾಗಿದ್ದು ಇಂಡೋನೇಶ್ಯಾದ ಜಕಾರ್ತಾದಲ್ಲಿ ಕೆಲಸ ಮಾಡುತ್ತಾರೆ.

Comments (0)
Add Comment