ಹಿಂದೂ ಧಾರ್ಮಿಕ ಕಾಯ್ದೆ ತಿದ್ದುಪಡಿ ವಿಧೇಯಕ ವಾಪಸ್‌

ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಸಂಗ್ರಹವಾಗುವ ಸಾಮಾನ್ಯ ಸಂಗ್ರಹಣಾ ನಿಧಿಯನ್ನು ಕಡಿಮೆ ಆದಾಯ ಇರುವ ‘ಸಿ’ ವರ್ಗದ ದೇವಾಲಯಗಳಿಗೆ ಬಳಸುವ ತಿದ್ದುಪಡಿ ಉದ್ದೇಶದ ಕಾನೂನು ವಿಧೇಯಕವನ್ನು
ರಾಜ್ಯಪಾಲರು ಸರಕಾರಕ್ಕೆ ವಾಪಸ್‌ ಕಳಿಸಿದ್ದಾರೆ.

1997ರಲ್ಲಿ ಈ ಕಾಯಿದೆಗೆ ತರಲಾಗಿದ್ದ ತಿದ್ದುಪಡಿಗೆ ಸಂಬಂಧಿಸಿದ ಅರ್ಜಿ ಸುಪ್ರೀಂ ಕೋರ್ಟ್‌ ನಲ್ಲಿ ಬಾಕಿ ಇದೇ. ಈ ಹಂತ ದಲ್ಲಿ ಮತ್ತೆ ತಿದ್ದುಪಡಿ ಮಾಡಬಹುದೇ ಎಂಬ ಕುರಿತು ಹೆಚ್ಚಿನ ವಿವರಣೆ ಮತ್ತು ಸ್ಪಷ್ಟನೆ ಅಗತ್ಯ ವಿದೆ ಎಂದು ರಾಜ್ಯ ಪಾಲರು ವಿಧೇಯಕ  ವಾಪಸ್‌ ಕಳಿಸಿರುವುದಕ್ಕೆ ಕಾರಣ ನೀಡಿದ್ದಾರೆ.

Comments (0)
Add Comment