ಹೊಸ ಶಾಸಕರಿಗೆ ಶಾಕ್..! ಸ್ಫೋಟಕ ಹೇಳಿಕೆ ನೀಡಿದ ಜಾರಕಿಹೊಳಿ!

 

ಬೆಂಗಂಗಳೂರು: ನಿಗಮ ಮಂಡಳಿಗಳ ನೇಮಕಾತಿ ಬಗ್ಗೆ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿ, ಕೇವಲ ಹಿರಿಯ ಶಾಸಕರನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಹೊಸದಾಗಿ ಆಯ್ಕೆಯಾದ ಯಾವೊಬ್ಬ ಶಾಸಕರಿಗೆ ಅವಕಾಶವಿಲ್ಲ.

ಮೂರ್ನಾಲ್ಕು ಬಾರಿ ಗೆದ್ದ ಶಾಸಕರಿಗೆ ಮಾತ್ರ ಈ ಪಟ್ಟಿಯಲ್ಲಿ ಅವಕಾಶ ನೀಡಲಾಗಿದ್ದು, ನಮ್ಮ ಜಿಲ್ಲೆಯ 2-3 ಶಾಸಕರಿಗೆ ಸ್ಥಾನ ಸಿಗುವ ಸಾಧ್ಯತೆಯಿದೆ ಎಂದಿದ್ದಾರೆ. ಈ ಮೂಲಕ ಆಕಾಂಕ್ಷಿತ ಶಾಸಕರಿಗೆ ಆಘಾತ ಆದಂತಾಗಿದೆ.

ಹೊಸ ಶಾಸಕರಿಗೆ ಶಾಕ್..! ಸ್ಫೋಟಕ ಹೇಳಿಕೆ ನೀಡಿದ ಜಾರಕಿಹೊಳಿ!
Comments (0)
Add Comment