300 ಅಡಿ ಆಳಕ್ಕೆ ಬಿದ್ದು ಅಮರನಾಥ ಯಾತ್ರಾರ್ಥಿಯೊಬ್ಬರು ಮೃತ್ಯು

ಶ್ರೀನಗರ:ಅಮರನಾಥ ಯಾತ್ರೆಗೆ ಹೊರಟಿದ್ದ ಯಾತ್ರಾರ್ಥಿಯೊಬ್ಬರು 300 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟವರು ಬಿಹಾರದ ರೋಹ್ತಾಸ್ ಜಿಲ್ಲೆಯ ತುಂಬ ಗ್ರಾಮದ ನಿವಾಸಿ ವಿಜಯ್ ಕುಮಾರ್ ಶಾ ಎಂದು ಗುರುತಿಸಲಾಗಿದೆ.

ವಿಜಯ್ ಕುಮಾರ್ ಶಾ ಮತ್ತೊಬ್ಬರು ಯಾತ್ರಾರ್ಥಿ ಮಮತಾ ಕುಮಾರಿಯೊಂದಿಗೆ ಪವಿತ್ರ ಗುಹೆಯಿಂದ ಹಿಂತಿರುಗುತ್ತಿದ್ದಾಗ ಕಾಳಿಮಾತೆಯ ಬಳಿ ಕಾಲು ಜಾರಿ 300 ಅಡಿ ಕೆಳಗೆ ಬಿದ್ದಿದ್ದಾರೆ. ಯಾತ್ರಾರ್ಥಿಯನ್ನು ಮೌಂಟೇನ್ ಪಾರುಗಾಣಿಕಾ ತಂಡ ಮತ್ತು ಭಾರತೀಯ ಸೇನೆ ಜಂಟಿಯಾಗಿ ರಕ್ಷಿಸಿತ್ತು. ಆದರೂ ಯಾತ್ರಾರ್ಥಿ ಬದುಕುಳಿಯಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Comments (0)
Add Comment