5 ಕೋಟಿ ವಂಚನೆ ಆರೋಪ: ಹಿರೇಹಡಗಲಿ ಸ್ವಾಮೀಜಿ ನಾಪತ್ತೆ!

 

 

ಹೊಸಪೇಟೆ: MLA ಟಿಕೆಟ್ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ 75 ಕೋಟಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚೈತ್ರಾ ಕುಂದಾಪುರ ಸೇರಿ ಮತ್ತಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಹಡಗಲಿ ತಾಲೂಕಿನ ಹಿರೇಹಡಗಲಿ ಹಾಲು ಮಠದ ಅಭಿನವ ಹಾಲಶ್ರೀ ಇದೀಗ ನಾಪತ್ತೆಯಾಗಿದ್ದಾರೆ. ಬೆಳಗ್ಗೆಯಿಂದ ಮಠಕ್ಕೂ ಬಂದಿಲ್ಲ, ಫೋನ್ ಕೂಡ ಸ್ವಿಚ್ ಆಫ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.! ಎಂಎಲ್‌ಎ ಟಿಕೆಟ್ ಕೊಡಿಸುವುದಾಗಿ ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಕೂಡ 1.50 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಕೇಳಿಬಂದಿದೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹಾಲಶ್ರೀ ಸ್ವಾಮೀಜಿ ಅಜ್ಞಾತ ಸ್ಥಳಕ್ಕೆ ತರಳಿದ್ದಾರೆ. ವಿಜಯನಗರ ಜಿಲ್ಲೆಯ ಹಗಡಲಿ ತಾಲೂಕಿನ ಹಿರೇಹಡಗಲಿ ಹಾಲು ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಹಿಂದೂಪರ ಸಂಘಟನೆಗಳಲ್ಲಿ ಗುರುಸಿಕೊಂಡಿದ್ದರು. ಹೀಗಾಗಿ, ಚೈತ್ರಾ ಕುಂದಾಪುರ ಗ್ಯಾಂಗ್‌ ಇವರನ್ನು ಸುಲಭವಾಗಿ ಪುಸಲಾಯಿಸಿ ವಂಚನೆಹಗೊಳಗಾದ ಸಂತ್ರಸ್ಥರಿಗೆ ಟಿಕೆಟ್‌ ಕೊಡಿಸುವ ಭರವಸೆಯನ್ನು ಸ್ವಾಮೀಜಿ ಅವರಿಂದ ಹೇಳಿಸಿದ್ದರೆ ಎಂದು ತಿಳಿದುಬಂದಿದೆ.

5 ಕೋಟಿ ವಂಚನೆ ಆರೋಪ: ಹಿರೇಹಡಗಲಿ ಸ್ವಾಮೀಜಿ ನಾಪತ್ತೆ!
Comments (0)
Add Comment