ಇಂದು ಮುಖ್ಯ ಮಂತ್ರಿ ಸಿದ್ದರಾಮಯ್ಯರ ಬಜೆಟ್ ಮಂಡನೆ.! ಜನರ ನೀರಿಕ್ಷಗೆ ಸ್ಪಂದನೆ ಆಗುತ್ತಾ.?

 

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಬಜೆಟ್ ಮಂಡಿಸುವಲ್ಲಿ ತಮ್ಮದೇ ದಾಖಲೆಯನ್ನು ಇಂದು ಶುಕ್ರವಾರ ಮುರಿಯಲಿದ್ದಾರೆ.

ಅವರು ಮಂಡನೆ ಮಾಡುತ್ತಿರುವ 14ನೇ ಬಜೆಟ್ ಇದಾಗಿರಲಿದೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಿಸಿದ ಉಚಿತ ಗ್ಯಾರಂಟಿಗಳಿಗೆ ಎಷ್ಟು ಅನುದಾನ ಹಂಚಿಕೆ ಮಾಡಬಹುದು ಎಂಬುದರ ಮೇಲೆ ಎಲ್ಲರ ಗಮನವಿದೆ. ಜನಪರ ಯೋಜನೆಗಳ ಹೊರತಾಗಿ, ಸರ್ಕಾರವು ಅಸ್ತಿತ್ವದಲ್ಲಿರುವ ಯೋಜನೆಗಳಿಗೆ ಅವಕಾಶ ಕಲ್ಪಿಸಬೇಕಾಗುತ್ತದೆ ಮತ್ತು ಮೇ 2024 ರ ಲೋಕಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಕಲ್ಯಾಣ ಕ್ರಮಗಳನ್ನು ಘೋಷಿಸಬಹುದು ಎಂಬ ನಿರೀಕ್ಷೆಗಳೂ ಇವೆ.!

Chief Minister Siddaramaiah's budget presentation today! Is there a response to people's inquiry?
Comments (0)
Add Comment