KSRTC ನೌಕರರಿಗೆ ಗುಡ್ ನ್ಯೂಸ್!

 

ಬೆಂಗಳೂರು: KSRTC ನೌಕರರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದ್ದು ತುಟ್ಟಿಭತ್ಯೆ ದರವನ್ನು ಶೇ.35 ರಿಂದ ಶೇ.38.75 ಕ್ಕೆ ಹೆಚ್ಚಿಸಿ ಆದೇಶಿಸಿದೆ.

ಈ ವರ್ಷದ ಜುಲೈನಿಂದಲೇ ಈ ಆದೇಶ ಪೂರ್ವಾನ್ವಯವಾಗಲಿದ್ದು ನಾಲ್ಕೂ ಸಾರಿಗೆ ನಿಗಮಗಳು ಪರಿಷ್ಕೃತ ತುಟ್ಟಿಭತ್ಯೆ ದರವನ್ನು ಅನುಷ್ಠಾನಗೊಳಿಸಿ ಪಾವತಿಸಲು ಸೂಚಿಸಲಾಗಿದೆ.

ಈ ಮಧ್ಯೆ ಆಯಾ ಸಂಸ್ಥೆಗಳ ಆರ್ಥಿಕ ಸ್ಥಿತಿಗಳಿಗೆ ಅನುಗುಣವಾಗಿ ಹಿಂಬಾಕಿ ಪಾವತಿಸಲು ಸರ್ಕಾರ ಆದೇಶ ನೀಡಿ ನೌಕರರಿಗೆ ಶುಭ ಸುದ್ದಿ ನೀಡಿದೆ.

 

Comments (0)
Add Comment