ಬೆಂಗಳೂರು,ಸೆ.29:ನೆಲ, ಜಲ, ಭಾಷೆ ವಿಚಾರ ಬಂದಾಗ ಚಿತ್ರರಂಗದ ಕಡೆ ಎಲ್ಲರ ಚಿತ್ತ ಇರುತ್ತೆ. ಅವರಿಂದ ತಲುಪೋ ಸಂದೇಶ ಇನ್ನೂ ಶಕ್ತಿಯುತವಾಗಿರುತ್ತೆ ಅನ್ನೋ ನಂಬಿಕೆ. ಕನ್ನಡ ಚಿತ್ರರಂಗವೂ ಬೆಂಬಲ ಕೊಟ್ಟು ಶೂಟಿಂಗ್ ,ಸಿನಿಮಾ ಪ್ರದರ್ಶನ ರಾಜ್ಯಾದ್ಯಂತ ಇಂದು ಸ್ಥಗಿತಗೊಳಿಸಿದೆ.
ಶಿವಣ್ಣ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದ್ದು, ಬೆಳಗ್ಗೆ 10 ಘಂಟೆಗೆ ಗುರುರಾಜ ಕಲ್ಯಾಣ ಮಂಟಪದಲ್ಲಿ ಪ್ರತ್ಯೇಕ ಹೋರಾಟ ನಡೆಯಲಿದೆ. ಅಲ್ಲಿಯೇ ಚಿತ್ರರಂಗದ ನಟ ನಟಿಯರು ಬರುತ್ತಾರೆ. ಶಿವಣ್ಣ, ರವಿಚಂದ್ರನ್, ಪ್ರೇಮ್, ಧ್ರುವಸರ್ಜಾ, ವಿಜಯ್ ರಾಘವೇಂದ್ರ, ಶ್ರೀಮುರುಳಿ ಸೇರಿದಂತೆ ಎಲ್ಲರಿಗೂ ತಿಳಿಸಿದ್ದೇವೆ. ನಮ್ಮದು ರೈತರ ಪರ ಹೋರಾಟ, ಬಂದ್ಗೆ ಇಡೀ ಚಿತ್ರೋದ್ಯಮದ ಬೆಂಬಲವಿದೆ ಎಂದು ತಿಳಿಸಿದರು.
ಶಿವರಾಜ್ಕುಮಾರ್ ನೇತೃತ್ವದಲ್ಲಿ ಕಾವೇರಿಗಾಗಿ ಚಿತ್ರರಂಗ ಪ್ರತಿಭಟನೆ ಮೂಲಕ ಬೆಂಬಲ ವ್ಯಕ್ತಪಡಿಸಲಿದೆ. ಪ್ರತಿಭಟನಾ ಸಭೆಯಲ್ಲಿ ರವಿಚಂದ್ರನ್, ನಟ ಗಣೇಶ್, ಧ್ರುವಸರ್ಜಾ, ವಿಜಯ್ ರಾಘವೇಂದ್ರ, ನಟ ಶ್ರೀಮುರಳಿ, ನಿಖಿಲ್ ಕುಮಾರಸ್ವಾಮಿ, ವಿನೋದ್ರಾಜ್ , ಹಿರಿಯ ನಟಿಯರಾದ ಲೀಲಾವತಿ, ಶೃತಿ ಸೇರಿದಂತೆ ಚಿತ್ರರಂಗದ ಬಹುತೇಕ ಕಲಾವಿದರು ಕಾವೇರಿ ಉಳಿವಿಗಾಗಿ ಧನಿ ಎತ್ತಲಿದ್ದಾರೆ ಎಂದು ಫಿಲ್ಮಂ ಚೆಂಬರ್ ಅಧ್ಯಕ್ಷ ಎಂ. ಎನ್ ಸುರೇಶ್ ತಿಳಿಸಿದರು.
Disclaimer: This Story is auto-aggregated by a Syndicated Feed and has not been Created or Edited By City Big News Staff.