ಕುತೂಹಲ.! ಸೂರ್ಯನಿಗೆ ಬಳೆ ತೊಡಿಸಿದವರು ಯಾರು.!
![](https://suddimane.com/wp-content/uploads/2023/09/1693556748213.jpg)
ಬೆಂಗಳೂರು: ಬಾಹ್ಯಾಕಾಶದ ವಿದ್ಯಮಾನಗಳು ಎಲ್ಲರಲ್ಲೂ ಕುತೂಹಲ ಹಾಗೂ ವಿಸ್ಮಯ ಮೂಡಿಸುತ್ತವೆ. ನಿನ್ನೆ ಕೊಡಗು ಜಿಲ್ಲೆಯಲ್ಲಿ ಅಪರೂಪದ ಬಾಹ್ಯಾಕಾಶದ ವಿದ್ಯಮಾನವೊಂದು ಗೋಚರಿಸುವ ಮೂಲಕ ಇದಕ್ಕೆ ಸಾಕ್ಷಿಯಾಗಿದೆ.
ಸೂರ್ಯನ ಸುತ್ತಲೂ ಆಕರ್ಷಕ ಬಳೆಯ ಆಕಾರ ಗೋಚರವಾಗಿದೆ. ಟಿಶೆಟ್ಟಿಗೇರಿ, ಶ್ರೀಮಂಗಲ, ಪೊನ್ನಂಪೇಟೆ ತಾಲೂಕಿನ ವಿವಿಧೆಡೆ ಮೂರು ಬಣ್ಣಗಳ ಬೃಹತ್ ಉಂಗುರವು ಸೂರ್ಯನನ್ನು ಸುತ್ತ ಗೋಚರವಾಗಿದೆ. ಈ ಘಳಿಗೆಯನ್ನು ಹಲವರು ಕೌತುಕದಿಂದ ವೀಕ್ಷಿಸಿದರು.