Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

DL ನವೀಕರಿಸದಿದ್ದರೆ ಮಾಲೀಕರೇ ಹೊಣೆ: ಹೈಕೋರ್ಟ್‌

DL ಅವಧಿ ಮುಗಿದ 30 ದಿನದೊಳಗೆ ನವೀಕರಣ ಮಾಡಿಸಿಕೊಳ್ಳಬೇಕು. ಒಂದುವೇಳೆ ನವೀಕರಣಕ್ಕೆ ಅರ್ಜಿ ಸಲ್ಲಿಸದಿದ್ದಲ್ಲಿ ಅಪಘಾತ ಸಂಭವಿಸಿದಾಗ ಅದರ ಹೊಣೆ ವಾಹನ ಚಾಲಕ ಹೊರಬೇಕು&ಮಾಲೀಕ ಸಂತ್ರಸ್ತರಿಗೆ ಪರಿಹಾರ ಕೂಡ ನೀಡಬೇಕಾಗುತ್ತದೆ ಎಂದು ಹೈಕೋರ್ಟ್‌ ಆದೇಶಿಸಿದೆ.

DL ಮುಗಿದ ದಿನದಿಂದ 30ದಿನದಲ್ಲಿ ನವೀಕರಣಕ್ಕೆ ಅರ್ಜಿ ಸಲ್ಲಿಸಿದ ಬಗ್ಗೆ ಸಾಕ್ಷ್ಯ ಒದಗಿಸದ ಪ್ರಕರಣದ ವಿಚಾರಣೆಯಲ್ಲಿ ಹೈಕೋರ್ಟ್‌, ಅಪಘಾತಕ್ಕೆ ಕಾರಣನಾದ ಆಂಬುಲೆನ್ಸ್‌ ಚಾಲಕನ ಮೇಲೆ ಮೋಟಾರು ಅಪಘಾತ ಪರಿಹಾರ ಕ್ಲೇಮು ನ್ಯಾಯಾಧಿಕರಣ ಹೊರಿಸಿದ್ದ 50% ಹೊಣೆಯನ್ನು 100%ಕ್ಕೆ ಹೆಚ್ಚಳ ಮಾಡಿ ಆದೇಶ ನೀಡಿದೆ.