Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಗೃಹ ಲಕ್ಷ್ಮಿ  ಮಹಿಳೆಯರಿಗಿಲ್ಲಿದೆ ಗುಡ್ ನ್ಯೂಸ್.!

 

ಬೆಂಗಳೂರು: ಗೃಹ ಲಕ್ಷ್ಮಿ ಯೋಜನೆಯಡಿಯಲ್ಲಿ  2,000 ಹಣ ಸಿಗದೇ ಇದ್ದು ನಿರಾಶರಾಗಿರುವ ಮಹಿಳೆಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.

ರೇಷನ್ ಕಾರ್ಡ್‌ನಲ್ಲಿ ‘ಮನೆ ಯಜಮಾನಿ’ ಎಂದು ತಿದ್ದುಪಡಿ ಮಾಡಲು ಇಂದಿನಿಂದ ಸೆಪ್ಟೆಂಬರ್ 10ರವರೆಗೆ ಕಾಲಾವಕಾಶ ನೀಡಿದೆ. ಆನ್‌ಲೈನ್/ಆಫ್‌ಲೈನ್ ಮೂಲಕ ನೀವು ತಿದ್ದುಪಡಿ ಮಾಡಬಹುದು.

ಪಡಿತರ ಚೀಟಿಯಲ್ಲಿ ಪುರುಷರೇ ಮುಖ್ಯಸ್ಥರಾಗಿದ್ದರೆ ನಿಮಗೆ  2,000 ಸಿಗುವುದಿಲ್ಲ. ಹೀಗಾಗಿ ನಿಗದಿತ ಕಾಲಮಿತಿಯೊಳಗೆ ಮನೆಯ ಯಜಮಾನಿಯ ಹೆಸರು ಸೇರಿಸಿ.