Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸ್ವತಂತ್ರ ಲಿಂಗಾಯತ ಧರ್ಮ ಈ ಕಾರಣಕ್ಕೆ ಆಗಬೇಕು.? ಯಾರನ್ನು ಹೊರತು ಪಡಿಸಿ ಕಟ್ಟಬಹುದು.?

 

ಪ್ರತ್ಯೇಕ ಲಿಂಗಾಯತ ಧರ್ಮ ಎನ್ನುವುದು ಒಂದು ವೈಚಾರಿಕ ಸಾಂಸ್ಕöÈತಿಕ ಆಂದೋಲನವಾಗಬೇಕಿತ್ತು. ಆದರೆ ರಾಜಕೀಯ ಮೇಲಾಟಗಳ ವೇದಿಕೆ ಆಗಿಬಿಟ್ಟಿತು. ಹಾಗಾಗದೆ ನಿಜವಾದ ರೀತಿಯಲ್ಲಿ ಲಿಂಗಾಯತ ಧರ್ಮದ ಘೋಷಣೆ ಆಗಬೇಕಿರುವುದು ಅಗತ್ಯ.

* ವಚನಗಳಲ್ಲಿ ವ್ಯಕ್ತವಾಗಿರುವ ಆಶಯಗಳನ್ನು ಆಧರಿಸಿ ಲಿಂಗಾಯತ ಧರ್ಮ ಘೋಷಿತವಾದರೆ ಪ್ರಪಂಚದ ಮಾನವೀಯ ಧರ್ಮಗಳಲ್ಲೊಂದಾಗುತ್ತದೆ.

* ದೇವಸ್ಥಾನ ಮತ್ತು ಪುರೋಹಿತಶಾಹಿಯ ಬಗ್ಗೆ ವಿರೋಧವಿತ್ತು.

* ಜಾತಿ ವ್ಯವಸ್ಥೆ, ವರ್ಣಾಶ್ರಮ ಪದ್ಧತಿಯನ್ನು ಶರಣರು ತಿರಸ್ಕರಿಸಿದ್ದರು.

* ಮೂರ್ತಿ ಪೂಜೆ, ವ್ರತ, ಮುಹೂರ್ತ, ಘಳಿಗೆಗಳಲ್ಲಿ ನಂಬಿಕೆ ಇಲ್ಲ.

* ಈ ಕಾರಣಗಳಿಂದ ಅದು ಪ್ರತ್ಯೇಕ ಧರ್ಮ ಎನ್ನುವುದು ಯಥಾರ್ಥ.

ಪ್ರತ್ಯೇಕ ಧರ್ಮವಾಗುವುದರಿಂದ ಬಸವಾದಿ ಶರಣರನ್ನು ಜಾಗತಿಕ ಮಟ್ಟದಲ್ಲಿ ಧರ್ಮ ಸ್ಥಾಪಕರ ಗೌರವ ಲಭಿಸುತ್ತದೆ.

* ಅಲ್ಪ ಸಂಖ್ಯಾತ ಧರ್ಮಗಳಿಗಿರುವ ಸಾಂವಿಧಾನಿಕ ಸವಲತ್ತು ಸಿಗುತ್ತದೆ.

*ಶಿಕ್ಷಣ ಸಂಸ್ಥೆಗಳ ಆದಾಯಕ್ಕೆ ತೆರಿಗೆ ರಿಯಾಯಿತಿ, ಸೀಟು ಹಂಚಿಕೆಯಲ್ಲಿ ಹೆಚ್ಚಿನ ಸ್ವಾತಂತ್ರ÷್ಯ, ಫೀಸು ನಿಗದಿಯಲ್ಲಿ ರಿಯಾಯತಿ ದೊರೆಯುತ್ತದೆ.

* ಬೇರೆ ಸಮುದಾಯಗಳನ್ನು ಲಿಂಗಾಯತರನ್ನಾಗಿ ಸೇರಿಸಿಕೊಳ್ಳಲು ಅವಕಾಶವಾಗುತ್ತದೆ. ಸಾಮಾಜಿಕವಾಗಿ ಪ್ರಬಲರಾಗಲು ಸಾಧ್ಯ.

*ಪುರೋಹಿತರು, ಜ್ಯೋತಿಷಿಗಳ ಪ್ರಭಾವ ನಿವಾರಣೆಯಾಗಿ ಲಿಂಗಾಯತ ಐಕ್ಯತೆ ಬಲಗೊಳ್ಳುತ್ತದೆ.

*ಸಾಮಾಜಿಕ ಸಂಘ ಸಂಸ್ತೆಗಳಿಗೆ ಅಲ್ಪಸಂಖ್ಯಾತ ಮಾನ್ಯತೆ ಹಾಗೂ ಅನುದಾನ ದೊರೆಯುತ್ತದೆ.

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

ಚಳ್ಳಕೆರೆ ಬಸವರಾಜ

9916881352