Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

INDvsPAK: ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿ

ಕೊಲಂಬೊ: ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತದ ಇನ್ನಿಂಗ್ಸ್‌ನ 25ನೇ ಓವರ್​ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ. ಸದ್ಯ ಧಾರಾಕಾರ ಮಳೆಯಾಗುತ್ತಿದ್ದು, ಹೀಗಾಗಿ ಮೈದಾನವನ್ನು ಕವರ್​ಗಳಿಂದ ಮುಚ್ಚಲಾಗಿದೆ. 24.1 ಓವರ್‌ಗಳಲ್ಲಿ ಭಾರತವು ಪ್ರ,ಮುಖ 2 ವಿಕೆಟ್‌ ನಷ್ಟಕ್ಕೆ 147 ರನ್​ ಕಲೆಹಾಕಿದೆ. ಶುಭ್​ಮನ್ ಗಿಲ್ (58 ರನ್, 52 ಎಸೆತ) ಹಾಗೂ ರೋಹಿತ್ ಶರ್ಮಾ (56 ರನ್, 49 ಎಸೆತ) ವಿಕೆಟ್‌ ಕಳೆದುಕೊಂಡಿದ್ದಾರೆ. ಸದ್ಯ ಕ್ರೀಸ್​ನಲ್ಲಿ ಕೆಎಲ್ ರಾಹುಲ್ (17) ಹಾಗೂ ವಿರಾಟ್ ಕೊಹ್ಲಿ (8) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.