ಬೆಂಗಳೂರು: ಕನ್ನಡದ ನಟ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ, ವಿದೇಶಿಯ ಪ್ರಯಾಣದಲ್ಲಿದ್ದಾಗ ಹೃದಯಘಾತದಿಂದ ಸಾವನ್ನಪ್ಪಿದ್ದು, ಅವರಿಗೆ ಇಂದು ಹಾಲು ತುಪ್ಪ ಶಾಸ್ತ್ರವನ್ನು ಕುಟುಂಬಸ್ಥರು ನೇರವೇರಿಸಿದರು.
ಮೊದಲಿಗೆ ವಿಜಯರಾಘವೇಂದ್ರ ಮತ್ತು ಅವರ ಮಗ ಶೌರ್ಯ ಹಾಲು ತುಪ್ಪ ಬಿಡುವ ಶಾಸ್ತ್ರ ನೆರವೇರಿಸಿದರು. ಬಿಕೆ ಶಿವರಾಂ, ರಕ್ಷಿತ್ ಮತ್ತು ಕುಟುಂಬದ ಸದಸ್ಯರು ಒಬ್ಬರ ನಂತರ ಮತ್ತೊಬ್ಬರಂತೆ ಶಾಸ್ತ್ರ ಪೂರೈಸಿದರು.
ಸ್ಪಂದನ ಮಾವ ಅಂದರೆ ವಿಜಯ ರಾಘವೇಂದ್ರ ಮತ್ತು ಶ್ರೀ ಮುರಳಿ ತಂದೆ ಎಸ್ ಎ ಚಿನ್ನೇಗೌಡ ಮತ್ತು ಬೇರೆಯವರೆಲ್ಲ ಶಾಸ್ತ್ರ ನಡೆಸುವಾಗ ವಿಜಯರಾಘವೇಂದ್ರ ಹಿಂದೆ ಸರಿದು ನಿರ್ಭಾವುಕರಾಗಿ ನಿಲ್ಲುತ್ತಾರೆ. ಕುಟುಂಬದ ಸದಸ್ಯರೊಂದಿಗೆ ವಿದೇಶ ಪ್ರವಾಸ ತೆರಳಿದ್ದ ಸ್ಪಂದನ ವಿಜಯರಾಘವೇಂದ್ರ ಸೋಮವಾರ ಬೆಳಗಿನ ಜಾವ ಬ್ಯಾಂಕಾಕ್ ನ ಹೊಟೆಲೊಂದರಲ್ಲಿ ಕಡಿಮೆ ರಕ್ತದೊತ್ತಡದಿಂದ ಕಾರ್ಡಿಯಾಕ್ ಅರೆಸ್ಟ್ ಆಗಿ ಸಾವನ್ನಪ್ಪಿದರು.
Disclaimer: This Story is auto-aggregated by a Syndicated Feed and has not been Created or Edited By City Big News Staff.