Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ವಚನ —ಮನುಮುನಿ ಗುಮ್ಮಟದೇವ

 

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.ಸ

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

 

ವಚನ: : ಬಲ್ಲವನ ಭಾವ ಶರೀರದ ಹಂಗನರಿಯಬೇಕು.

ಸಂಚಿತದಲ್ಲಿ ತೋರುವ ಸಂಕಲ್ಪ,

ಆಗಾಮಿಯಲ್ಲಿ ತೋರುವ ಸುಖಭೋಗ,

ಪ್ರಾರಬ್ಧದಲ್ಲಿ ತೋರುವ ಆಸುರ ಕರ್ಮ ಪ್ರಾಪ್ತಿ.

ಇಂತಿವ ನೇತಿಗಳೆದು ನಿರ್ಲೇಪನಾಗಿರು.

ಯೋಗ ಭೋಗ ತ್ಯಾಗ ಇಂತೀ ತ್ರಿಗುಣದಲ್ಲಿ

ಲೇಪವಾಗದೆ ಅರಿ,

ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವ.

 

-ಮನುಮುನಿ ಗುಮ್ಮಟದೇವ